Slide
Slide
Slide
previous arrow
next arrow

ಗ್ರೀನ್‌ಕೇರ್‌ನಿಂದ ಆರೋಗ್ಯ ತಪಾಸಣಾ ಶಿಬಿರ

300x250 AD

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಗ್ರೀನ್ ಕೇರ್ ಶಿರಸಿಯ ಜಂಟಿ ಆಶ್ರಯದಲ್ಲಿ ಸೆ.24ರಂದು ವಿದ್ಯಾರ್ಥಿಗಳಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಡಿ. ಜನಾರ್ಧನ್ ಉದ್ಘಾಟಿಸಿದರು. ಗ್ರೀನ್ ಕೇರ್ ಶಿರಸಿಯ ನಿರ್ದೇಶಕರಾದ ಶ್ರೀಮತಿ ಆಶಾ ಡಿಸೋಜಾ ಹಾಗೂ ತಾಲೂಕು ಆರೋಗ್ಯ ಕೇಂದ್ರದ ಮಹಾಂತೇಶ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಿ ಆರೋಗ್ಯ ಸಲಹೆ ನೀಡಲಾಯಿತು. ಕಾಲೇಜಿನ ರೆಡ್ ಕ್ರಾಸ್ ಸಂಚಾಲಕರಾದ ಶರತ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಲಕ್ಷ್ಮೀ ಹಾಗೂ ನಿಖಿತಾ ಪ್ರಾರ್ಥಿಸಿದರು. ಕು. ಸೌಮ್ಯ ಪಟಗಾರ್ ವಂದಿಸಿದರು. ಗೀತಾ ಸಿದ್ದಿ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top